ಇಂದು 11 ಜನರಿಗೆ ಕೋವಿಡ್ -19 ದೃಡಪಡಿಸಲಾಗಿದೆ ಇನ್ನೂ ಚಿಕಿತ್ಸೆಯಲ್ಲಿರುವವರು 87 ಮಂದಿ; ಇಂದು 4 ಜನರು ಗುಣಮುಖರಾಗಿದ್ದಾರೆ
ತಿರುವನಂತಪುರಂ: ಇಂದು ಕೇರಳದಲ್ಲಿ 11 ಜನರಿಗೆ ಕೋವಿಡ್ -19 ದೃಡಪಡಿಸಿರುವುದಾಗಿ ಆರೋಗ್ಯ ಸಚಿವೆ ಕೆ.ಕೆ.ಶೈಲಾಜಾ ಟೀಚರ್ ತಿಳಿಸಿದರು. ತ್ರಿಶೂರ್ ಜಿಲ್ಲೆಯಲ್ಲಿ ನಾಲ್ವರಿಗೆ, ಕೋಳಿಕೋಡ್ ಜಿಲ್ಲೆಯಿಂದ ಮೂವರಿಗೆ, ಪಾಲಕ್ಕಾಡ್ ಮತ್ತು ಮಲಪ್ಪುರಂ ಜಿಲ್ಲೆಗಳಿಂದ ಇಬ್ಬರಿಗೆ ರೋಗ ದೃಡಪಡಿಸಿರುವುದು. ಈ ಪೈಕಿ 11 ಮಂದಿ ರಾಜ್ಯದ ಹೊರಗಿನಿಂದ ಬಂದವರು. ಈ ಪೈಕಿ ಏಳು ಮಂದಿ ವಿದೇಶಗಳಿಂದ ಮತ್ತು ತಲಾ 2 ತಮಿಳುನಾಡು ಮತ್ತು ಮಹಾರಾಷ್ಟದಿಂದ ಬಂದವರು.
ಅದೇಸಮಯ, ರೋಗ ಪತ್ತೆಹಚ್ಚಿ ಚಿಕಿತ್ಸೆಯಲ್ಲಿದ್ದ 4 ಜನರ ತಪಾಸಣಾ ಫಲಿತಾಂಶ ಋಣಾತ್ಮಕವಾಗಿವೆ. ವಯನಾಡ್ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ತಲಾ ಇಬ್ಬರ ತಪಾಸಣೆಯ ಫಲಿತಾಂಶಗಳು ನಕಾರಾತ್ಮಕವಾಗಿರುವುದು. ಈವರೆಗೆ 87 ಜನರಿಗೆ ಈ ರೋಗ ದೃಡಪಡಿಸಿ ಇನ್ನು ಚಿಕಿತ್ಸೆ ಪಡೆಯುತ್ತಿರುವವರು.ಈವರೆಗೆ 497 ಜನರನ್ನು ಕೋವಿಡ್ನಿಂದ ಗುಣಮುಖರಾಗಿದ್ದಾರೆ.
ವಿಮಾನ ನಿಲ್ದಾಣದ ಮೂಲಕ 2911ಜನರೂ, ಬಂದರು ಮೂಲಕ 793 ಜನರೂ,ಚೆಕ್ ಪೋಸ್ಟ್ ಮೂಲಕ 50,320 ಜನರೂ ಮತ್ತು ರೈಲು ಮೂಲಕ 1021 ಜನರು ಸೇರಿದಂತೆ ರಾಜ್ಯದಲ್ಲಿ ಒಟ್ಟು 55,045 ಜನರು ಆಗಮಿಸಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 56,981 ಜನರು ನಿರೀಕ್ಷಣೆಯಲ್ಲಿದ್ದಾರೆ. ಈ ಪೈಕಿ 56,362 ಜನರು ಮನೆಗಳಲ್ಲಿ ಮತ್ತು 619 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿರುವರು. ಒಟ್ಟು 182 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿಯವರೆಗೆ, 43,669 ವ್ಯಕ್ತಿಗಳ (ಓಗ್ಮೆಂಟೆಡ್ ಮಾದರಿ ಸೇರಿದಂತೆ) ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.ಇದರಲ್ಲಿ ಲಭ್ಯವಾದ 41,814 ಮಾದರಿಗಳ,ತಪಾಸಣಾ ಫಲಿತಾಂಶ ಋಣಾತ್ಮಕವಾಗಿವೆ. ಇದಲ್ಲದೆ, ಸೆಂಟಿನೆಲ್ ಸರ್ವೈಲೆನ್ಸ್ ನ ಭಾಗವಾಗಿ ಆರೋಗ್ಯ ಕಾರ್ಯಕರ್ತರು, ಅತಿಥಿ ಕೆಲಸಗಾರರು ಮತ್ತು ಸಾಮಾಜಿಕ ಸಂಪರ್ಕ ಹೆಚ್ಚಾಗಿರುವ ವ್ಯಕ್ತಿಗಳ ಆದ್ಯತೆಯ ಗುಂಪುಗಳಿಂದ 4764 ಮಾದರಿಗಳನ್ನು ಸಂಗ್ರಹಿಸಲಾಗಿರುವುದರಲ್ಲಿ 4644 ಮಾದರಿಗಳು ಋಣಾತ್ಮಕವಾಗಿವೆ.
ಇಂದು, 6 ಪ್ರದೇಶಗಳನ್ನು ಕೂಡ ಹಾಟ್ ಸ್ಪಾಟ್ಗೆ ಸೇರಿಸಲಾಗಿದೆ. ಕಾಸರಗೋಡ್ ಜಿಲ್ಲೆಯ ನೀಲೇಶ್ವರಂ, ಕಾಸರಗೋಡು ಪುರಸಭೆಗಳು, ಕಲ್ಲಾರ್, ಇಡುಕ್ಕಿ ಜಿಲ್ಲೆಯ ವಂದನ್ಮೇಡು, ಕರುನಾಪುರಂ ಮತ್ತು ವಯನಾಡ್ ಜಿಲ್ಲೆಯ ತಾವಿಂಜಾಲ್ ಮುಂತಾದುವು ಹೊಸ ಹಾಟ್ ಸ್ಪಾಟ್ ಗಳು. ಈಗಿನಂತೆ, ಪ್ರಸ್ತುತ ಒಟ್ಟು 22 ಹಾಟ್ ಸ್ಪಾಟ್ಗಳಿವೆ.
- Log in to post comments